ಚೆಟ್ಟಳ್ಳಿ, ಡಿ. 23: ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕಾರು ಚಾಲಕ ಚರಣ್ ಆಚಾರ್ ಅವರ “ಹಳ್ಳಿ ಹೈದನಾ ಮಾತು” ಕೃತಿ ಬಿಡುಗಡೆಗೊಂಡಿದೆ. ಮೈಸೂರಿನ ನಾದ ಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಾಯಿತು. ಮೈಸೂರಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜಿ. ವಿಜಯ್ ಕುಮಾರ್, ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಕೆ. ಕುಚೇದ್, ಆಶ್ರಯ ಸಮಿತಿ ಮಾಜಿ ಅಧ್ಯಕ್ಷ ಬಿ. ರಮೇಶ್, ಎಲ್‍ಎಲ್‍ಐಸಿಯ ಎನ್.ಹೆಚ್. ವಿಶ್ವನಾಥ್, ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಷಣ್ಮುಗಂ, ಚರಣ್ ಆಚಾರ್, ಪೋಷಕರಾದ ಚಂದ್ರ್ರಾಚರ್ ಹಾಗೂ ಮಂಗಳಮ್ಮ ಹಾಜರಿದ್ದರು. ಕಾರ್ಯಕ್ರಮದಲ್ಲಿ ಚರಣ್ ಆಚಾರ್ ಅವರನ್ನು ಗೌರವಿಸಲಾಯಿತು.