ಕುಶಾಲನಗರ, ಜ. 21: ದಲಿತರನ್ನು ನಾಯಿಗೆ ಹೋಲಿಸಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ದಲಿತ ಸಂಘರ್ಷ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಕೆ.ಬಿ.ರಾಜು ನೇತೃತ್ವದಲ್ಲಿ ಪ್ರತಿಭಟನಾಕಾರರು ಟೌನ್ ಕಾಲನಿಯಿಂದ ಅನಂತಕುಮಾರ್ ಪ್ರತಿಕೃತಿಯನ್ನು ಮೆರವಣಿಗೆ ನಡೆಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ದಹಿಸಿದರು. ಅನಂತ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಷ ವ್ಯಕ್ತಪಡಿಸಿ ಅವರ ಗಡಿಪಾರಿಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಿಎಸ್‍ಎಸ್ ಪ್ರಮುಖರಾದ ಕೆ.ಆರ್.ಕೀರ್ತಿರಾಜು, ಜಯಪ್ರಕಾಶ್, ದರ್ಶನ್, ಸ್ವಾಮಿ, ದುರ್ಗೇಶ್, ಶಿವಕುಮಾರ್ ಮತ್ತಿತರರು ಇದ್ದರು.