ಶ್ರೀಮಂಗಲ, ಜ. 21: ಕುಟ್ಟ ಸಮೀಪದ ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯ ಚೂರಿಕಾಡು ಸರಕಾರಿ ಪ್ರಾಥಮಿಕ ಶಾಲೆಯ 2 ಎಕರೆ ಆಟದ ಮೈದಾನವನ್ನು ಇದೀಗ ಖಾಸಗಿ ವ್ಯಕ್ತಿಗೆ ಕಾಫಿ ಒಣಗಿಸಲು ನೀಡಲಾಗಿದೆ. ಬದಲಾಗಿ ಆ ವ್ಯಕ್ತಿ ಶಾಲೆಯ ಶಿಕ್ಷಕರ ಕೊಠಡಿಗೆ ಟೈಲ್ಸ್ ಹಾಕಲು ಒಪ್ಪಿಕೊಂಡಿದ್ದಾರೆ.

ಶಾಲಾ ಮೈದಾನವಿಲ್ಲದೆ ಮಕ್ಕಳಿಗೆ ತೊಂದರೆಯಾಗಿದೆ; ತಾ. 24ರ ವಾರ್ಷಿಕೋತ್ಸವದ ತಯಾರಿ ಹಾಗೂ ಕಾರ್ಯಕ್ರಮಗಳಿಗೂ ಅವಕಾಶವಿಲ್ಲದಂತಾಗಿದೆ. ಅಲ್ಲದೆ ಕಾಫಿ ಶುಚಿತ್ವದ ಧೂಳಿನಿಂದ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.