ಸೋಮವಾರಪೇಟೆ, ಜ.22: ತಾಲೂಕು ಶ್ರೀ ನಾರಾಯಣಗುರು ಸೇವಾ ಸಮಿತಿಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಬಿ.ಎ. ಭಾಸ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಜಿ. ಇಂದಿರಾ ರಮೇಶ್ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಎನ್.ಡಿ. ಕೃಷ್ಣಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಉಪಾಧ್ಯಕ್ಷರಾಗಿ ಎಸ್.ಕೆ. ಸುಂದರ್, ಸಹ ಕಾರ್ಯದರ್ಶಿಯಾಗಿ ಇಂದಿರಾ ಮೋಣಪ್ಪ, ಖಜಾಂಚಿಯಾಗಿ ಎಂ.ಜಿ. ರಮೇಶ್ ಹಾಗೂ ಗೌರವ ಅಧ್ಯಕ್ಷರಾಗಿ ಸಿ. ಲಕ್ಷ್ಮಣ್ ಪೂಜಾರಿಯವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ನಿರ್ದೇಶಕರುಗಳಾಗಿ ಬಿ.ಆರ್. ಚಂದ್ರಹಾಸ್, ಗಣೇಶ್ ಕುಂಬೂರು, ಎನ್.ಡಿ. ಕೃಷ್ಣಪ್ಪ, ಎಂ.ಆರ್. ರಾಘವ, ಬಿ.ಸಿ. ಕಿರಣ್, ಬಿ.ಜೆ. ವಿನೋದ್ ಜಯರಾಂ, ಉಷಾ ಶೇಷಪ್ಪ, ಜಿ. ಗಣೇಶ್, ಬಿ.ಜಿ. ಪ್ರಕಾಶ್, ಟಿ.ಎಸ್. ಜಯಂತ್, ಬಿ.ಸಿ. ದಿನೇಶ್, ತ್ರಿಲೇಶ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಸಮಿತಿಯ ಮಾಜಿ ಖಜಾಂಚಿ ಡೊಂಬಯ್ಯ ಹಾಜರಿದ್ದರು.