ಸುಂಟಿಕೊಪ್ಪ, ಫೆ. 10: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹಾತ್ವಕಾಂಕ್ಷೆ ಯೋಜನೆಯ ಹೊಗೆ ಮುಕ್ತ ರಾಷ್ಟ್ರವಾಗಿಸಲು ಬಡತನ ರೇಖೆಗಿಂತ ಕೆಳಗಿರುವ ಮಂದಿಗೆ ಉಚಿತವಾಗಿ ನೀಡುತ್ತಿರುವ ಅಡುಗೆ ಅನಿಲವನ್ನು ವಾಲ್ನೂರು-ತ್ಯಾಗತ್ತೂರು ಪಂಚಾಯಿತಿಯ 40 ಮಂದಿಗೆ ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಕುಮಾರ್ ವಿತರಿಸಿದರು.

ಅಭ್ಯತ್‍ಮಂಗಲ ಗ್ರಾಮ ಸೇರಿದಂತೆ ಈಗಾಗಲೇ 140 ಮಂದಿಗೆ ಉಚಿತ ಅಡುಗೆ ಅನಿಲ ಸೌಲಭ್ಯವನ್ನು ವಿತರಿಸಲಾಯಿತು. ಸುಂಟಿಕೊಪ್ಪ ಕೂರ್ಗ್ ಇಂಡೇನ್ ಗ್ಯಾಸ್ ವ್ಯವಸ್ಥಾಪಕ ರಾಕೇಶ್ ಈ ಸಂದರ್ಭ ಉಪಸ್ಥಿತರಿದ್ದರು.