ಮಡಿಕೇರಿ, ಫೆ. 10: ಮಡಿಕೇರಿ ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಗಾಳಿಬೀಡುವಿನ ಚಪ್ಪಂಡಕೆರೆಯ ಸ್ನೇಹಿತರ ಯುವಕ ಸಂಘದÀ ಸಂಯುಕ್ತ ಆಶ್ರಯದಲ್ಲಿ ಹುತಾತ್ಮರ ದಿನಾಚರಣೆ ನಡೆಯಿತು.

ಗಾಳಿಬೀಡುವಿನ ದವಸ ಭಂಡಾರದ ಅಧ್ಯಕ್ಷ ಕೊಂಬಾರನ ಪಿ. ಲಿಂಗರಾಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅತಿಥಿಗಳು ಉದ್ಘಾಟಿಸಿದರು.

ಹೆಬ್ಬೆಟ್ಟಗೇರಿ ಶಾಲಾ ಉಪಾಧ್ಯಾಯ ಗಾಳಿಬೀಡು ಕೋಳುಮುಡಿಯನ ಬಾಲಕೃಷ್ಣ ಮಾತನಾಡಿದರು. ಗಾಳಿಬೀಡು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಕೊಂಬಾರನ ಪಿ. ಗಣಪತಿ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಆರ್. ಅನಂತಕುಮಾರ್, ಶ್ರೀ ಮಾದುರಪ್ಪ ಸ್ವಸಹಾಯ ಸಂಘದ ಚಪ್ಪಂಡಕೆರೆ ಕಾರ್ಯದರ್ಶಿ ಎಂ.ಡಿ. ಲತೀಶ್ ಆಳ್ವ, ಸ್ನೇಹಿತರ ಯುವಕ ಸಂಘದ ಅಧ್ಯಕ್ಷ ಕೋಳುಮುಡಿಯನ ಎ. ಮೋಹನ್ ಹಾಗೂ ಸಂಘದ ಸದಸ್ಯರುಗಳು ಹಾಜರಿದ್ದರು.

ಕೆ.ಎ. ಮೋಹನ್ ಸ್ವಾಗತಿಸಿ, ನಿರೂಪಿಸಿದರು, ಕೆ.ಎಸ್. ಪವನ್ ಕುಮಾರ್ ವಂದಿಸಿದರು.