ಮಡಿಕೇರಿ, ಫೆ. 10: ನಮೋ ಗ್ರೂಪ್ ಫೌಂಡೇಶನ್ ವತಿಯಿಂದ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಮತ್ತು ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ನಮೋ ಗ್ರೂಪ್‍ನ ರಾಷ್ಟ್ರೀಯ ಕಾರ್ಯದರ್ಶಿ ದಿವ್ಯದೃಷ್ಠಿ ಪರಶುರಾಮ್, ರಾಜ್ಯಾಧ್ಯಕ್ಷ ಚಂದ್ರಶೇಖರ್, ರಾಷ್ಟ್ರೀಯ ಐಟಿ ಟೆಕ್ನಲಾಜಿಯ ಉಮೇಶ್ ಜಾದವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕುಲ್‍ದೀಪ್ ಪೂಣಚ್ಚ, ಜಿಲ್ಲಾಧ್ಯಕ್ಷ ನವೀನ್ ಪೂಜಾರಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ಗಣೇಶ್ ರೈ, ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಮಿನಾಜ್ ಪ್ರವೀಣ್, ಕೊಡಗು ಜಿಲ್ಲಾ ಉಸ್ತುವಾರಿ ಪ್ರವೀಣ್ ರಾಘವನ್, ಮಡಿಕೇರಿ ತಾಲೂಕು ಅಧ್ಯಕ್ಷ ಕೋಬಾನ ವೇತನ್, ವೀರಾಜಪೇಟೆ ಅಧ್ಯಕ್ಷ ಮಾಚೆಟ್ಟಿರ ಸಚಿನ್ ಮಂದಣ್ಣ, ಜಿಲ್ಲಾ ಸಹ ಸಂಚಾಲಕ ಪೊನ್ನೆಟ್ಟಿ ಅರುಣ, ಜಿಲ್ಲಾ ಉಪಾಧ್ಯಕ್ಷ ಸುಜತ್, ಕುಮಾತ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.