ಪೊನ್ನಂಪೇಟೆ, ಫೆ. 10: ಧಾರವಾಡದ ಹಿರಿಯ ವಕೀಲ ಬಿ.ಐ. ದೊಡ್ದಮಾನಿ ಎಂಬವರನ್ನು ಕೆಲವು ದಿನಗಳ ಹಿಂದೆ ಹಾಡುಹಗಲೇ ಕೆಲವು ದುಷ್ಕರ್ಮಿಗಳು ಮಾರಾಕಾಸ್ತ್ರ ದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನ ಮಾಡಿರುವದನ್ನು ಪೆÇನ್ನಂಪೇಟೆ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಈ ಹಿನ್ನೆಲೆ ಇಲ್ಲಿನ ವಕೀಲರು ಶುಕ್ರವಾರದಂದು ನ್ಯಾಯಾಲಯ ಕಲಾಪ ಬಹಿಷ್ಕಾರ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ನೂತನ ನ್ಯಾಯಾಲಯದ ಸಂಕೀರ್ಣದಲ್ಲಿ ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ಡಿ. ಕಾವೇರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಸೇರಿದ ವಕೀಲರ ಸಂಘದ ಪದಾಧಿಕಾರಿಗಳು, ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿದರು.

ಪೊನ್ನಂಪೇಟೆ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ವಿ.ಜಿ. ಮಂಜುನಾಥ್, ಖಜಾಂಚಿ ಕೆ.ಬಿ. ಸಂಜೀವ, ಪದಾಧಿಕಾರಿಗಳಾದ ಎಸ್.ವಿ. ಸುರೇಶ, ಸಿ.ಬಿ. ಅನಿತ, ಎ.ಕೆ. ಮೋನಿ ಪೆÇನ್ನಪ್ಪ, ಟಿ.ಎಂ. ಅಣ್ಣಯ್ಯ ಮುಂತಾದವರು ಇದ್ದರು.