ಮಡಿಕೇರಿ, ಫೆ. 11: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವೈದ್ಯ ಶಾಸ್ತ್ರ ವಿಭಾಗದ ವತಿಯಿಂದ ಸಕ್ಕರೆ ಖಾಯಿಲೆ ಹೃದಯ ರೋಗದ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ವೈದ್ಯರಾದ ದೇವಯ್ಯ ಸಂಸ್ಥೆಯ ನಿರ್ದೇಶಕರಾದ ಡಾ. ಮಹೇಂದ್ರ ಬಿ.ಜೆ., ಪ್ರಾಂಶುಪಾಲರಾದ ಕಾರ್ಯಪ್ಪ ಕೆ.ಬಿ., ವೈದ್ಯಕೀಯ ಅಧೀಕ್ಷಕರಾದ ಅಬ್ದುಲ್ ಅಜಿಜ್, ಕೊಡಗು ಐಎಂಎ ಅಧ್ಯಕ್ಷರಾದ ಮೋಹನ್ ಅಪ್ಪಾಜಿ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಮೇರಿ ನಾಣಯ್ಯ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೆಎಂಸಿ ಸಹ ಪ್ರಾಧ್ಯಾಪಕರಾದ ಡಾ. ರಾಜೇಗೌಡ, ಡಾ. ದೀಪಕ್‍ಮಡಿ, ಡಾ. ಎಸ್. ಅರುಣ್, ನ್ಯೂರಾಲಾಜಿಸ್ಟ್ ಡಾ. ಪ್ರಮೋದ್, ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ನೆಪ್ರೊಲಾಜಿಸ್ಟ್, ಡಾ. ಮಂಜುನಾಥ್ ಶೆಟ್ಟಿ, ಆಂಕಾಲಾಜಿಸ್ಟ್ ಡಾ. ಪ್ರದೀಪ್ ಇವರುಗಳು ಕಾರ್ಯಕ್ರಮದಲ್ಲಿ ಸಕ್ಕರೆ ಖಾಯಿಲೆ ಹೃದಯ ರೋಗ, ಕಿಡ್ನಿ ಸಮಸ್ಯೆ, ಎದೆನೋವು ಮತ್ತು ತುರ್ತು ಚಿಕಿತ್ಸಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.