ಮಡಿಕೇರಿ, ಫೆ. 18: ಪಾಶ್ರ್ವವಾಯು ಪೀಡಿತರಾಗಿ ಕೈ-ಕಾಲು ಸ್ವಾಧೀನ ಕಳೆದುಕೊಂಡು ತೊಂದರೆ ಅನುಭವಿಸುತ್ತಿರುವ ಮಕ್ಕಂದೂರಿನ ನಿವಾಸಿ ರಾಮಚಂದ್ರ ಅವರಿಗೆ ಸಿದ್ದಾಪುರದ ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ, ಕೊಡಗು ಯೂನಿಯನ್ ವತಿಯಿಂದ ನೀಡಲಾದ ರೂ. 4 ಸಾವಿರದ ಚೆಕ್‍ನ್ನು ಮಡಿಕೇರಿ ಶಾಖೆಯ ಎಸ್.ಎನ್.ಡಿ.ಪಿ. ಅಧ್ಯಕ್ಷ ಟಿ.ಆರ್. ವಾಸುದೇವ್, ಕಾರ್ಯದರ್ಶಿ ಸುಜಾತ ಶಿವರಾಮ ಹಾಗೂ ಸಮಿತಿ ಸದಸ್ಯರುಗಳ ಮೂಲಕ ಹಸ್ತಾಂತರಿಸಲಾಯಿತು.