ಕುಶಾಲನಗರ, ಫೆ. 18: ಕುಶಾಲನಗರ ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ಸಮುದಾಯ ಬಾಂಧವರಿಗೆ ಸೌಹಾರ್ದ ಕ್ರೀಡಾಕೂಟ ನಡೆಯಿತು. ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟವನ್ನು ವೇದಿಕೆಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಉದ್ಘಾಟಿಸಿದರು.

ಕಬಡ್ಡಿ, ಹಗ್ಗಜಗ್ಗಾಟ, ಥ್ರೋಬಾಲ್, 100 ಮೀ. ಓಟ, ವೇಗದ ನಡಿಗೆ, ಗುಂಡು ಎಸೆತ, ಪಾಸಿಂಗ್ ದ ಬಾಲ್, ಮ್ಯೂಸಿಕಲ್ ಛೇರ್ ಮತ್ತಿತರ ಸ್ಪರ್ಧೆಗಳು ನಡೆದವು.

ಈ ಸಂದರ್ಭ ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಉದ್ಯಮಿ ಉಮಾಶಂಕರ್, ಸಮಾಜದ ಪ್ರಮುಖರಾದ ಸರೋಜಮ್ಮ, ಹಳಗದ್ದೆ ಮಾದಪ್ಪ ಮತ್ತಿತರರು ಇದ್ದರು.