ಸೋಮವಾರಪೇಟೆ, ಫೆ. 18: ತಾಲೂಕು ಕದಳಿ ಮಹಿಳಾ ವೇದಿಕೆ ರಚಿಸಲಾಗಿದ್ದು, ಅಧ್ಯಕ್ಷರಾಗಿ ಲೇಖನ ಧರ್ಮೇಂದ್ರ ಹಾಗೂ ಕಾರ್ಯದರ್ಶಿಯಾಗಿ ಕಮಲಾ ಉದಯ್ ಕುಮಾರ್ ಆಯ್ಕೆಯಾಗಿದ್ದಾ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ತಿಳಿಸಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಶರಣ ಸಾಹಿತ್ಯ ಪರಿಷತ್‍ನ ಅಧೀನದಲ್ಲಿ ಕದಳಿ ಮಹಿಳಾ ವೇದಿಕೆ ಕಾರ್ಯ ನಿರ್ವಹಿಸಲಿದ್ದು, ಜಾತಿ, ಮತ ಭೇದವಿಲ್ಲದೆ ಎಲ್ಲರನ್ನೂ ಕದಳಿ ವೇದಿಕೆಗೆ ಸದಸ್ಯರನ್ನಾಗಿ ಸೇರಿಸಿಕೊಳ್ಳಬಹುದೆಂದರು. 12ನೇ ಶತಮಾನದ ವಚನಗಾರ್ತಿ ಅಕ್ಕಮಹಾದೇವಿಯ ವಿಚಾರಗಳ ನೆಲೆಗಟ್ಟಿನಲ್ಲಿ ರಚಿತಗೊಂಡಿರುವ ಕದಳಿ ಮಹಿಳಾ ವೇದಿಕೆ ಮಹಿಳೆಯರಿಗಾಗಿ ವಚನಗಳ ಪ್ರಸಾರ, ವಿಚಾರ ವಿನಿಮಯಕ್ಕೆ ವೇದಿಕೆ ಒದಗಿಸಿದೆ ಎಂದು ತಿಳಿಸಿದ್ದಾರೆ.

ನಿರ್ದೇಶಕರುಗಳಾಗಿ ಪಾರ್ವತಮ್ಮ ಕಾಳಿಂಗಪ್ಪ, ಕಾಂತಮಣಿ, ವಿದ್ಯಾ ಭಾರತೀಶ್, ಭಾರತಿ ಗಿರೀಶ್, ಶಾಲಿನಿ ವಿಶ್ವನಾಥ್, ಮಂಜುಳ ಅಪ್ಪಾಜಪ್ಪ, ಮಂಗಳ, ಪಂಕಜ ಕುಮಾರ್, ಮೋಹಿನಿ ನಟರಾಜ್, ಬೇಬಿ ರಮೇಶ್, ವಿಜಯ್ ಪಾಲಾಕ್ಷ, ರಾಧಾ ಕೃಷ್ಣ, ಮಣಿ ಶಿವಪ್ಪ, ಚಂದ್ರಕಲಾ ಶಾಂಭಶಿವ ಮೂರ್ತಿ, ಮಂಜುಳಾ ಮಂಜುನಾಥ್, ಗೀತಾ ಪರಮೇಶ್, ವಿಶೇಷ ಆಹ್ವಾನಿತರಾಗಿ ನಾಗಮ್ಮ ಸದಾಶಿವಪ್ಪ, ಪದ್ಮಾ ಪುರುಷೋತ್ತಮ್ ಆಯ್ಕೆಯಾಗಿದ್ದಾರೆ.