ಮಡಿಕೇರಿ, ಫೆ. 18: ಪಾರಾಣೆ ಸಮೀಪದ ಕೈಕಾಡು ಗ್ರಾಮದ ಮುಕ್ಕೊಟ್ಟು ಶ್ರೀ ಮಹಾಲಕ್ಷ್ಮಿ ದೇವಾಲಯದ ಪೌಳಿ ಪುನರ್ ನವೀಕರಣ ಕಾರ್ಯವನ್ನು ರೂ. 75 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಕದ್ದಣಿಯಂಡ ಹರೀಶ್ ಬೋಪಣ್ಣ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯೆ ಉಮಾಪ್ರಭು, ಗ್ರಾ.ಪಂ. ಸದಸ್ಯ ಎನ್.ಟಿ. ಮುತ್ತಪ್ಪ, ದೇವಾಲಯ ಸಮಿತಿ ಪ್ರಮುಖರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.