ಸಿದ್ದಾಪುರ, ಫೆ. 18: ಸಿದ್ದಾಪುರ ಸಮೀಪದ ಇಂಜಿಲಗೆರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಅಖಿಲಾ ಎಂಬ ಬಾಲಕಿಯ ಚಿಕಿತ್ಸೆಗೆ ನೆಲ್ಲಿಹುದಿಕೇರಿ ಎಸ್.ಕೆ.ಎಸ್. ಎಸ್.ಎಫ್. ಸಂಘಟನೆಯ ಶಾಖೆಯ ವತಿಯಿಂದ ರೂ. 10 ಸಾವಿರ ನೆರವು ನೀಡಿದ್ದಾರೆ. ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳಾದ ಇಕ್ಬಾಲ್ ಮೌಲವಿ, ತಮ್ಲಿಕ್ ಧಾರಿಮಿ ಇತರರು ಹಾಜರಿದ್ದರು.