ಕುಶಾಲನಗರ, ಫೆ. 18: ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಶ್ರೀ ಮಾರಿಯಮ್ಮ ದೇವಾಲಯದ 9ನೇ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಪೂಜೋತ್ಸವದ ಅಂಗವಾಗಿ ವೇದಬ್ರಹ್ಮ ಶ್ರೀ ಹರಿಭಟ್ ನೇತೃತ್ವದಲ್ಲಿ ಅರ್ಚಕ ಉಮೇಶ್ ಹೊಳ್ಳ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿದರು. ಮಹಾಗಣಪತಿ ಹೋಮ, ಚಂಡಿಕಾ ಪಾರಾಯಣ, ದುರ್ಗಾಹೋಮ, ಪಂಚಾಮೃತ ಅಭಿಷೇಕ, ನವಕ ಕಲಶ ಪೂಜೆ, ನವಕ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಇದೇ ಸಂದರ್ಭ ಕುಶಾಲನಗರ ದೇವಾಲಯ ಒಕ್ಕೂಟದಿಂದ ಸಾಮೂಹಿಕ ಪೂಜೆ ನೆರವೇರಿತು. ದೇವಾಲಯ ಒಕ್ಕೂಟ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಮಾರಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ರಾಮದಾಸ್, ಕಾರ್ಯದರ್ಶಿ ಚರಣ್, ಖಜಾಂಚಿ ಜಗದೀಶ್, ನಿರ್ದೇಶಕರು ಗಳಾದ ಹೆಚ್.ಎನ್. ರಾಮಚಂದ್ರ, ಕೆ.ಎನ್. ಅಶೋಕ್, ಮುತ್ತಣ್ಣ, ಕೆಂಗಪ್ಪ, ನೇಮಿರಾಜು, ದಾನಿಗಳಾದ ಉಮಾಶಂಕರ್ ಇದ್ದರು.