ಕೂಡಿಗೆ, ಫೆ. 19: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಂಭಾಗ ದಲ್ಲಿ ಇತ್ತೀಚೆಗೆ ಉದ್ಘಾಟನೆ ಗೊಂಡ ಸಂಗೀತ ಕಾರಂಜಿ ಹಾಗೂ ಬೃಂದಾವನದ ವೀಕ್ಷಣೆಗೆ ಕಾವೇರಿ ಟ್ರಿಬ್ಯೂನಲ್ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ 144ನೇ ಆದೇಶ ದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗುರುವಾರದಿಂದಲೇ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಟ್ರಿಬ್ಯೂನಲ್ ಹೈತೀರ್ಪು ಕರ್ನಾಟಕದ ಪರ ಇರುವ ಹಿನ್ನೆಲೆಯಲ್ಲಿ ನಿರ್ಬಂಧಮುಕ್ತ ಹೇರಿರುವದರಿಂದ ಪ್ರವಾಸಿಗರು ನಿರಾಶರಾಗಿ ಹಿಂತಿರುಗಿತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮೇಲಾಧಿಕಾರಿಗಳ ಆದೇಶ ಬರುವವರೆಗೆ ವೀಕ್ಷಣೆಗೆ ಪ್ರವಾಸಿ ಗರಿಗೆ ಅವಕಾಶ ನೀಡಲಾಗುವ ದಿಲ್ಲ ಎಂದು ಕಾರ್ಯಪಾಲಕ ಅಭಿಯಂತರ ಧರ್ಮರಾಜ್ ತಿಳಿಸಿದ್ದಾರೆ.