ವೀರಾಜಪೇಟೆ, ಫೆ. 19 : ಕೊಡಗು ಜಿಲ್ಲೆಯಲ್ಲಿ ಶತಶತ ಮಾನಗಳಿಂದಲೂ ನೆಲೆ ನಿಂತಿರುವ ಬಲಿಜ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸದೃಢರಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅಭಿಪ್ರಾಯ ಪಟ್ಟರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಕೊಡಗು ಜಿಲ್ಲಾ ಬಲಿಜ ಸಮಾಜ ಹಾಗೂ ಮೂರು ತಾಲೂಕು ಬಲಿಜ ಸಮಾಜ ನಿರ್ದೇಶಕರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬಲಿಜ ಜನಾಂಗದ ಶೈಕ್ಷಣಿಕ ಪ್ರಗತಿಗಾಗಿ ಎಂ.ಎಸ್.ರಾಮಯ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ವೈದ್ಯಕೀಯ, ಇಂಜಿನಿಯರಿಂಗ್, ವಿವಿಧ ಪದವಿ ವ್ಯಾಸಂಗಕ್ಕಾಗಿ ಹಾಗೂ ‘ಮೆರಿಟ್’ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಕೊಡಗಿನ ಬಹುತೇಕ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುತ್ತಿರುವ ಕುರಿತು ವಿಷಾದಿಸಿದರು.

ಕೊಡಗಿನ ಮೂರು ತಾಲೂಕು ಹಾಗೂ ಜಿಲ್ಲಾ ಬಲಿಜ ಸಮಾಜದ ಸಮುದಾಯ ಭವನ ಹಾಗೂ ಅಭ್ಯುದಯ ಕಾರ್ಯಗಳಿಗೆ ಸರ್ಕಾರಿ ನಿವೇಶನ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವದಾಗಿಯೂ, ರಾಜ್ಯ ಸರ್ಕಾರದ ಯೋಜನೆಗಳನ್ನು ಹೊಂದಿಕೊಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಂತೆಯೂ ಅವರು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಸಮಾಜವು ರಾಜಕೀಯ ರಹಿತವಾಗಿ ಸಂಘಟಿತರಾಗುತ್ತಿದ್ದು, ಮೇ.19,20 ರಂದು ಹಾತೂರುವಿನಲ್ಲಿ ಬಲಿಜ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದ್ದು ಇತರೆ ಕೌಟುಂಬಿಕ ಕ್ರೀಡಾ ಹಬ್ಬಗಳಿಗೆ ಅನುದಾನ ನೀಡುತ್ತಿರುವಂತೆ ಬಲಿಜ ಕ್ರೀಡಾ ಹಬ್ಬಕ್ಕೂ ಅನುದಾನ ಕಲ್ಪಿಸಲು ಮನವಿ ಮಾಡಿದರು.

ವೀರಾಜಪೇಟೆ ತಾಲೂಕು ಬಲಿಜ ಸಮಾಜದ ಅಧ್ಯಕ್ಷ ಎಸ್.ಕೆ.ಗಣೇಶ್ ನಾಯ್ಡು ಮಾತನಾಡಿ, ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ಬಲಿಜ ಕುಟುಂಬಗಳಿಗೆ ‘ಬಿಲ್’ ಮೊತ್ತದಲ್ಲಿ ದೊಡ್ಡ ರಿಯಾಯಿತಿ ನೀಡುತ್ತಿರುವ ಕುರಿತು ಶ್ಲಾಘಿಸಿದರು. ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಟಿ.ಡಿ. ದಯಾನಂದ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷೆ ಮೀನಾಕ್ಷಿ ಕೇಶವ್ ಕನಿಷ್ಟ 0.50 ಎಕರೆ ನಿವೇಶನವನ್ನು ಬಲಿಜ ಸಮುದಾಯದ ಅಭ್ಯುದಯಕ್ಕೆ ಕೊಡಿಸಲು ಮನವಿ ಮಾಡಿದರು. ಜಿಲ್ಲೆಯಲ್ಲಿ ಕಳೆದ 40 ವರ್ಷಗಳಿಂದ ಬಲಿಜ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿರುವ ಸಿದ್ದಾಪುರ ಸಮೀಪ ಗುಹ್ಯ ಪದ್ಮಾ ಎಸ್ಟೇಟ್‍ನ ವಿಜಯಲಕ್ಷ್ಮಿ ಸಂಪತ್ ಕುಮಾರ್ ಅವರನ್ನು ಇದೇ ಸಂದರ್ಭ ಸಚಿವರು ಸನ್ಮಾನಿಸಿದರು.

ವೇದಿಕೆಯಲ್ಲಿ ಬಲಿಜ ಸಮಾಜ ಕಾನೂನು ಸಲಹೆಗಾರ ಸಂಜಯ್ ರಾಜ್, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೆÇನ್ನಪ್ಪ, ಸಚಿವರ ಆಪ್ತ ಹರೀಶ್‍ಬೋಪಣ್ಣ, ಕಾಂಗ್ರೆಸ್ ಪ್ರಮುಖರಾದ ಮಿಟ್ಟು ಚಂಗಪ್ಪ, ಇಬ್ರಾಯಿಂ ಮಾಸ್ಟರ್, ಸೋಮವಾರಪೇಟೆ ತಾಲೂಕು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಮೌಳಿ ಹಾಗೂ ಬಲಿಜ ಪ್ರಮುಖರಾದ ಕುಶಾಲನಗರದ ಸತೀಶ್ ನಾಯ್ಡು, ವೀರಾಜಪೇಟೆ ಗೋವಿಂದರಾಜು ನಾಯ್ಡು, ಶ್ರೀನಿವಾಸ್ ನಾಪೆÇೀಕ್ಲು, ಕೊಡಗು ಜಿಲ್ಲಾ ಬಲಿಜ ಸಮಾಜ ಪ್ರಧಾನ ಕಾರ್ಯದರ್ಶಿ ಟಿ.ಸಿ.ಗೀತಾನಾಯ್ಡು, ವೀರಾಜಪೇಟೆ ಬಲಿಜ ಸಮಾಜ ಪ್ರಧಾನ ಕಾರ್ಯದರ್ಶಿ ಟಿ.ಆರ್.ಗಣೇಶ್, ಪ್ರಮುಖರಾದ ಟಿ.ಎಸ್.ಬಾಲಕೃಷ್ಣ, ಟಿ.ವಿ.ಲೋಕೇಶ್, ಪೆರುಂಬಾಡಿ ದೇವಯ್ಯ, ಗೀತಾ ಶನಿವಾರಸಂತೆ, ಸಿ.ವಿ.ಜಯಪ್ಪ, ಯತಿರಾಜ್ ನಾಯ್ಡು, ನಾಪೆÇೀಕ್ಲು ಆನಂದಸ್ವಾಮಿ, ಬೆಕ್ಕೆಸೊಡ್ಲೂರು ಪಾಪಯ್ಯ ನಾಯ್ಡು, ಭವಾನಿ, ಶ್ಯಾಮಲಾ, ಸುಮಾ, ಸತ್ಯನಾರಾಯಣ್, ಲಲಿತಾ, ಹರೀಶ್, ಗಣೇಶ್ ಶೆಟ್ಟಿ, ಧರ್ಮಪ್ರಕಾಶ್, ಭರತ್, ಮದನ್, ಪದ್ಮಾ, ದೇವರಾಜ್, ಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ಸೋಮಾವಾರಪೇಟೆ ತಾಲೂಕು ಬಲಿಜ ಗಣತಿ ಕಾರ್ಯಕ್ರಮವನ್ನು ಮಾರ್ಚ್ ತಿಂಗಳಿನಲ್ಲಿ ಶಿರಂಗಾಲ ದಿಂದ ಚಾಲನೆ ನೀಡುವದಾಗಿ ಪ್ರಕಟಿಸಲಾಯಿತು.