ಶನಿವಾರಸಂತೆ, ಫೆ. 19: ಗೌಡಳ್ಳಿ ಗ್ರಾಮದ ಶ್ರೀ ನವದುರ್ಗಾಪರಮೇಶ್ವರಿ ದೇವಾಲಯದ ಕೃಪಾ ಪೋಷಿತ ಯಕ್ಷಗಾನ ರಂಗಮಂದಿರದಲ್ಲಿ ಶನಿವಾರಸಂತೆಯ ಶ್ರೀ ಕಾಳಿಕಾಂಬ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿಯ ಸದಸ್ಯರಾದ ಬಾಲಕೃಷ್ಣಾಚಾರ್, ಸಿ. ಪ್ರಕಾಶ್ಚಂದ್ರ, ಹರಿಕೀರ್ತಿ, ನಾಗರಾಜ್, ಕಿರಣ್, ಲತಾ, ಪ್ರೇಕ್ಷಿತ್, ಪ್ರೇಕ್ಷಾ ಇತರರು ದೇವರ ನಾಮ, ಭಕ್ತಿಗೀತೆಗಳನ್ನು ಹಾಡಿದರು. ದೇವಾಲಯ ಸಮಿತಿ ಅಧ್ಯಕ್ಷ ಎಚ್. ಆರ್. ಮುತ್ತಣ್ಣ, ಸದಸ್ಯರು, ಸಮುದಾಯ ಸಮಿತಿ ಅಧ್ಯಕ್ಷ ಜಿ.ಎ. ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.