ಗೋಣಿಕೊಪ್ಪಲು, ಫೆ. 20 : ಅಮೇರಿಕಾದ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ ವತಿಯಿಂದ ಕಿರುಗೂರು ಗ್ರಾಮದ ಹೊನ್ನಿಕೊಪ್ಪಲುವಿನ ಮಲ್ಲೇಶ್‍ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಮಲೇಶಿಯಾದ ಸಂಬಾನಂಥನ್ ಜಲಾಲ್ ಸುಲ್ತಾನ್ ಸುಲೈಮನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲೇಶ್ ಅವರ ಜ್ಯೋತಿಷ್ಯ ಮತ್ತು ತಂತ್ರಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ. ಹೊನ್ನಿಕೊಪ್ಪಲುವಿನಲ್ಲಿರುವ ಶನಿದೇವರ ದೇವಾಲಯದ ಅರ್ಚಕರಾಗಿರುವ ಮಲೇಶ್ ಕಿರುಗೂರುವಿನಲ್ಲಿ ಪ್ರಾಥಮಿಕ, ಪೊನ್ನಪ್ಪಸಂತೆಯಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ ನಂತರ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜುವಿನಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ. ಇವರು ರಾಮು ಮತ್ತು ಮಂಗಳ ದಂಪತಿಗಳ ಪುತ್ರ.