ಸುಂಟಿಕೊಪ್ಪ, ಫೆ. 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಉದ್ಯೋಗ ತರಬೇತಿ ಚೆನ್ನಕೇಶವ ಹಕ್ಕು ಭಾದ್ಯತ ಗುಂಪನ್ನು ಉದ್ಘಾಟಿಸಲಾಯಿತು. ಕಂಬಿಬಾಣೆ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ಸ್ವ ಉದ್ಯೋಗ ತರಬೇತಿ ಹಕ್ಕು ಬಾದ್ಯತ ಗುಂಪುನ್ನು ಡಾ .ಶಶಿಕಾಂತ ರೈ ಚಾಲನೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಚಿದಾನಂದ ಅವರು ಸ್ವ ಉದ್ಯೋಗ ಕುರಿತು ಮಾಹಿತಿಯನ್ನು ನೀಡಿದರು. ನೂತನ ಪ್ರತಿನಿಧಿಗಳಾಗಿ ಸಿದ್ದಪ್ಪ, ರವಿ ಮಾಯಕೃಷ್ಣ ಇವರುಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಜಯಂತ, ಪದಾಧಿಕಾರಿಗಳಾದ ದಿನೇಶ್, ರವಿ, ಗಂಗಾಧರ್ ಸ್ವಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.