ಪೊನ್ನಂಪೇಟೆ, ಫೆ. 20: ಎ.ಕೆ ಸುಬ್ಬಯ್ಯ ಅವರ ಅಭಿನಂದನಾ ಸಮಿತಿ ವತಿಯಿಂದ ತಾ. 25ರಂದು ನಿಗದಿಯಾಗಿದ್ದ ಎ.ಕೆ ಸುಬ್ಬಯ್ಯ ಅವರ ಅಭಿನಂದನಾ ಸಮಾರಂಭವನ್ನು ಕಾರಣಾಂತರದಿಂದ ತಾ. 27ಕ್ಕೆ ಮುಂದೂಡಲಾಗಿದೆ.

ಮುಖ್ಯಮಂತ್ರಿಗಳ ಕೋರಿಕೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಉಳಿದಂತೆ ಕಾರ್ಯಕ್ರಮ ಜರುಗುವ ಸ್ಥಳ ಮತ್ತು ಸಮಯದಲ್ಲಿ ಯಾವದೇ ಬದಲಾವಣೆಗಳಿಲ್ಲ. ಉದ್ದೇಶಿತ ಕಾರ್ಯಕ್ರಮ ಅಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಂಜೆ 5 ಗಂಟೆಯಿಂದ ಆರಂಭಗೊಳ್ಳಲಿದೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸುವದು ಖಚಿತಗೊಂಡಿದೆ ಎಂದು ಎ.ಕೆ. ಸುಬ್ಬಯ್ಯ ಅವರ ಅಭಿನಂದನಾ ಸಮಿತಿ ತಿಳಿಸಿದೆ.