ಮಡಿಕೇರಿ: ಪಿರಿಯಾಪಟ್ಟಣದ ಆವರ್ತಿಯ ಶ್ರೀ ರಾಜೇಶ್ವರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನದೊಂದಿಗೆ ಕಳೆದ ಸಾಲಿನಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿನಿ ಎಂ.ಟಿ. ಸುನಿತಾಳಿಗೆ ತಾ. 25 ರಂದು ಚಿಕ್ಕಮಗಳೂರಿನ ಬಿ.ಜಿ.ಎಸ್. ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸನ್ಮಾನ ನಡೆಯಲಿದೆ.