ಶ್ರೀಮಂಗಲ, ಫೆ. 22: ಕೊಡಗು ಜಿಲ್ಲೆಯಾದ್ಯಂತ ವನ್ಯ ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ತಾ. 23 ರಂದು (ಇಂದು) ಮಡಿಕೇರಿಯ ಅರಣ್ಯ ಭವನದ ಎದುರು ನಡೆಯಲಿರುವ ಪ್ರತಿಭಟನೆಗೆ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟ ಬೆಂಬಲ ನೀಡಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯ ತಿಳಿಸಿದ್ದಾರೆ.