ಶನಿವಾರಸಂತೆ, ಮಾ. 31: ಮಾರುತಿ ವ್ಯಾನೊಂದು ಸ್ಕೂಟರ್‍ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ಕೂನಕಂಡಿ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.ಸಮೀಪದ ಕೌಕೋಡಿ ಗ್ರಾಮದ ರಮೇಶ್ ಹಾಗೂ ಆತನ ಸಹೋದರಿ ವಸಂತ ಗಾಯಗೊಂಡವರು. ಇವರಿಬ್ಬರು ಹಾಗೂ ಹೊನ್ನೆಕೊಪ್ಪಲು ಗ್ರಾಮದ ನಿವಾಸಿ ಇವರ ಚಿಕ್ಕಪ್ಪ ಆರ್. ಮಣಿ ಮತ್ತು ಕುಟುಂಬದವರು ಕೌಕೋಡಿ ತೋಟದ ಹಬ್ಬಕ್ಕೆಂದು 2 ಬೈಕ್‍ಗಳಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದೆ.ಹೊಸೂರು ಕಡೆಯಿಂದ ಶನಿವಾರಸಂತೆ ಕಡೆಗೆ ಬರುತ್ತಿದ್ದ ವ್ಯಾನ್ ಸ್ಕೂಟರ್‍ಗೆ ಡಿಕ್ಕಿಯಾಗಿದೆ. ಗಾಯಾಳುಗಳಿಗೆ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಕಲಿಸಲಾಗಿದೆ.

ಚಿಕ್ಕಪ್ಪ ಆರ್. ಮಣಿ ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.