ವೀರಾಜಪೇಟೆ, ಮಾ. 31: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಬೆಂಗಳೂರಿನಿಂದ ಕೊಡಗು ಜಿಲ್ಲೆಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಸಂದರ್ಭ ಆನೆಚೌಕೂರು ಚೆಕ್‍ಪೋಸ್ಟ್ ಬಳಿ ವೀರಾಜಪೇಟೆ ತಹಶೀಲ್ದಾರ್ ಹಾಗೂ ಉಪಚುನಾವಣಾಧಿಕಾರಿ ಗೋವಿಂದರಾಜ್ ಮದ್ಯ ಹಾಗೂ ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರು ಮೂಲದ ಟಿ. ಚಂದ್ರಶೇಖರ್ ಎಂಬಾತ (ಕೆ.ಎ. 19 ಎಂ.ಎ 6033) ಕಾರಿನಲ್ಲಿ 3.750 ಲೀಟರ್ ಮದ್ಯವನ್ನು ಯಾವದೇ ಪರವಾನಗಿ ಇಲ್ಲದೆ ಸಾಗಿಸುತ್ತಿರುವದನ್ನು ಪತ್ತೆಹಚ್ಚಿದ ಚುನಾವಣಾ ತಂಡ ಮದ್ಯ ಹಾಗೂ ಕಾರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.