ಕುಶಾಲನಗರ: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ 39ನೇ ವಾರ್ಷಿಕ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ವಾರ್ಷಿಕೋತ್ಸವ ಹಾಗೂ ಹುಣ್ಣಿಮೆ ಅಂಗವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣದ ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ದೇವಾಲಯ ಅರ್ಚಕರಾದ ಸೋಮಶೇಖರ್ ಭಟ್, ಕೃಷ್ಣಮೂರ್ತಿ ಭಟ್, ವಿಷ್ಣುಮೂರ್ತಿ ಭಟ್ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿಗಳು ಜರುಗಿದವು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯ ಟ್ರಸ್ಟ್ ಅಧ್ಯಕ್ಷ ಬಿ.ಪಿ. ಗಣಪತಿ, ಖಜಾಂಚಿ ಸುಬ್ರಮಣಿ, ಟ್ರಸ್ಟಿಗಳಾದ ಡಿ.ಆರ್. ಸೋಮಶೇಖರ್ ಮತ್ತಿತರರು ಇದ್ದರು.

ದೇವರ ಹಬ್ಬ

ಮಡಿಕೇರಿ: ಹಾಕತ್ತೂರು ಗ್ರಾಮದ ಶ್ರೀ ಭಗವತಿ ಮತ್ತು ಚಾಮುಂಡೇಶ್ವರಿ ದೇವರ ಉತ್ಸವ ತಾ. 4, 5 ಮತ್ತು 6 ರಂದು ನಡೆಯಲಿದೆ. ತಾ. 4 ರಂದು ಶ್ರೀ ಭಗವತಿ ದೇವರು ಹೊರಬರುವದು, ತಾ. 5 ರಂದು ಚಾಮುಂಡಿ ತೆರೆ, ತಾ. 6 ರಂದು ಭಗವತಿ ದೇವರ ಜಳಕ ನಡೆಯಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.