ಸುಂಟಿಕೊಪ್ಪ, ಏ. 1: ಕೊಡಗು ಆದಿದ್ರಾವಿಡ ಸಮಾಜ ಸೇವಾ ಸಂಘದ ಸಮಾವೇಶ ತಾ. 16 ರಂದು ಸೋಮವಾರಪೇಟೆಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಸಮಾಜ ಭಾಂದವರಿಗೆ ಕ್ರೀಡಾಕೂಟ ತಾ. 8 ರಂದು ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸೋಮಪ್ಪ ತಿಳಿಸಿದ್ದಾರೆ.

ತಾ. 16 ರಂದು ಬೆಳಿಗ್ಗೆ 9.30 ಗಂಟೆಗೆ ಸೋಮವಾರಪೇಟೆ ಕಕ್ಕೆಹೊಳೆಯಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಮೆರವಣಿಗೆ ನಡೆಸಲಾಗುವದು. ಸಮುದಾಯಭವನ ನಿರ್ಮಾಣಕ್ಕೆ ಮೂಲಭೂತ ಸೌಕರ್ಯ ಉದ್ಯೋಗ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಆಗ್ರಹಿಸಿ ಹಕ್ಕೋತ್ತಾಯ ಮಂಡಿಸಲಾಗುವದು. ಜನಾಂಗದ ಸಂಸ್ಕøತಿ, ಆಚಾರ, ವಿಚಾರ, ಪರಂಪರೆ, ಸಂಪ್ರದಾಯವನ್ನು ಉಳಿಸಿ-ಬೆಳೆಸಬೇಕು ಜನಾಂಗದವರಿಗೆ ಜಾತಿ ದೃಢೀಕರಣ ಪತ್ರದಲ್ಲಿ ಆದಿದ್ರಾವಿಡ ಎಂದು ನಮೂದಿಸಬೇಕೆಂದು ಆಗ್ರಹಿಸಲಾಗುವದೆಂದು ಅವರು ತಿಳಿಸಿದ್ದಾರೆ.