ವೀರಾಜಪೇಟೆ, ಏ. 1: ತೋರ ಗ್ರಾಮದ ಕೆ.ಸಿ.ಪ್ರದ್ಯುಮ್ನ ಎಂಬವರ ಜಾಗದಲ್ಲಿ ಎರಡು ದಿನಗಳಿಂದ ಒಂಟಿ ಸಲಗ ಬೀಡು ಬಿಟ್ಟು ಹಾವಳಿ ಮಾಡುತ್ತಿದ್ದು ಮನೆಯಿಂದ ಹೊರ ಹೋಗಲು ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಇಲ್ಲಿನ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.

ಪ್ರದ್ಯುಮ್ನ ಅವರು ತನ್ನ ಮೊಮ್ಮಗ ಪೊನ್ನಣ್ಣ (6)ನೊಂದಿಗೆ ತಾ. 31ರಂದು ಬೆಳಿಗ್ಗೆ 9-30 ಗಂಟೆಗೆ ಮನೆಯಿಂದ ಗದ್ದೆ ಬಳಿಗೆ ತೆರಳುತ್ತಿದ್ದ ವೇಳೆ ಸುಮಾರು 30 ಮೀಟರ್ ಅಂತರದಲ್ಲಿ ಒಂಟಿ ಸಲಗ ಘೀಳಿಟ್ಟಿದ್ದು ಕೆಲವೇ ಅಂತರದಲ್ಲಿ ಪ್ರಾಣ ಹಾನಿಯಿಂದ ತಪ್ಪಿಸಿಕೊಂಡು ಇಬ್ಬರು ಓಡಿ ಮನೆ ಸೇರಿದ್ದಾರೆ.

ಅರಣ್ಯ ಅಧಿಕಾರಿಗಳಿಗೆ ತಕ್ಷಣ ದೂರು ನೀಡಿದ ಮೇರೆ ಇಲಾಖೆ ಸಿಬ್ಬಂದಿಗಳು ಒಂಟಿ ಸಲಗವಿರುವ ಜಾಗಕ್ಕೆ ಬಂದು ಸಲಗವನ್ನು ಮರಳಿ ಕಾಡಿಗೆ ಅಟ್ಟುವ ಕ್ರಮ ಕೈಗೊಂಡರು.