ಭಾಗಮಂಡಲ, ಏ. 1: ಕೆದಂಬಾಡಿ ಕ್ರಿಕೆಟ್ ಕಪ್ ಆಶ್ರಯದಲ್ಲಿ ಚೆಟ್ಟಿಮಾನಿಯ ಕೆದಂಬಾಡಿ ಆಟದ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕ್ರಿಕೆಟ್ ಉತ್ಸವದಲ್ಲಿ ನಿಡ್ಯಮಲೆ ಹಾಗೂ ದಂಬೆಕೋಡಿ ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾಟದಲ್ಲಿ ಹುದೇರಿ ತಂಡ ಕೈಬಿಲಿ ತಂಡವನ್ನು ಸೋಲಿಸಿತು. ಕೊಂಪುಳಿರ ತಂಡದ ವಿರುದ್ಧ ನಂಗಾರು ಸೋಲನುಭವಿಸಿತು. ತೆಕ್ಕಡೆ ತಂಡ ಪೈಕೇರ ತಂಡದ ವಿರುದ್ಧ ಜಯಗಳಿಸಿತು. ಮೇಲ್‍ಚೆಂಬು ವಿರುದ್ಧ ಚೆರಕನ ಸೋಲು ಕಂಡಿತು. ಹುದೇರಿ ತಂಡ ಕೊಂಪುಳಿರ ವಿರುದ್ಧ ಜಯ ಸಾಧಿಸಿತು. ದಂಬೆಕೋಡಿ ಮೇಲ್‍ಚೆಂಬು ತಂಡವನ್ನು ಮಣಿಸಿತು. ನಿಡ್ಯಮಲೆ ತಂಡ ಹುದೇರಿ ತಂಡವನ್ನು ಸೋಲಿಸಿತು. ದಂಬೆಕೋಡಿ ವಿರುದ್ಧ ತೆಕ್ಕಡೆ ಸೋಲು ಕಂಡಿತು.