ಮಡಿಕೇರಿ, ಏ. 1: ಮಡಿಕೇರಿ ನಗರದಲ್ಲಿ ಹನುಮ ಜಯಂತಿಯನ್ನು ಶ್ರದ್ಧ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ಶ್ರೀ ಆಂಜನೇಯ ದೇಗುಲದಲ್ಲಿ ಶನಿವಾರ ದಿನ ವಾಯುಸ್ತುತಿ ಪಠನದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀ ಆಂಜನೇಯ ಪ್ರತಿಮೆಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಅರ್ಚಕರುಗಳಾದ ಸಂತೋಷ್ ಭಟ್, ಆದರ್ಶ ಭಟ್ ಮತ್ತಿತರರು ಪೂಜಾದಿಗಳನ್ನು ನಡೆಸಿದರು.

“ಶಿವಶಕ್ತಿ” ಮಹಿಳಾ ಭಜನಾ ತಂಡದಿಂದ ವಿಷ್ಣು ಸಹಸ್ರನಾಮ ಪಠನ ಹಾಗೂ ಭಜನೆ ನೆರವೇರಿತು. ದೇವಸ್ಥಾನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಸಮಿತಿಯ ಮಾಜಿ ಅಧ್ಯಕ್ಷÀ ರಮೇಶ್ ಹೊಳ್ಳ್ಳ ಮೊದಲಾದವರು ಹಾಜರಿದ್ದರು.