ನಾಪೆÉÇೀಕ್ಲು, ಏ. 1: ಬಿಜೆಪಿ ಪಕ್ಷದ ಮುಷ್ಟಿಧಾನ್ಯ ಕಾರ್ಯಕ್ರಮಕ್ಕೆ ನಾಪೆÇೀಕ್ಲುವಿನಲ್ಲಿ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿ ಕೊಂಡಿರುವ ರೈತರ ಕುಟುಂಬದವರಿಗೆ ಸಹಾಯ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಸಹಕರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಾಡಿಯಮ್ಮಂಡ ಮುರಳಿ ಕರುಂಬಮಯ್ಯ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಬಿಜೆಪಿ ನಾಪೆÉÇೀಕ್ಲು ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಎಮ್ಮೆಮಾಡು ಸ್ಥಾನೀಯ ಅಧ್ಯಕ್ಷ ಚಂಬಾರಂಡ ಮಾಯಿನ್, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಮುಖಂಡರಾದ ಮಾಳೆಯಂಡ ಅಯ್ಯಪ್ಪ, ಕೋಡಿರ ಪ್ರಸನ್ನ, ಪಾಡಿಯಮ್ಮಂಡ ಮನು ಮಹೇಶ್, ಕೊಕ್ಕಳಂಡ್ರ ಧನಂಜಯ, ಸಿ.ಎ. ಮೊಯಿದು, ಕಂಗಾಂಡ ಜಾಲಿ ಪೂವಪ್ಪ, ಮತ್ತಿತರರು ಇದ್ದರು.