ಕುಶಾಲನಗರ, ಏ. 1: ಕುಶಾಲನಗರ ಸಮೀಪ ಕೂಡ್ಲೂರು ಗ್ರಾಮದಲ್ಲಿ ಹಸುವೊಂದು ಸತ್ತು ಬಿದ್ದು ಎರಡು ದಿನಗಳಾದರೂ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು, ಜಾನುವಾರು ವಾರಸುದಾರರು ಕ್ರಮಕೈಗೊಳ್ಳದೆ ಇದ್ದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಕಂಡ ಸ್ಥಳೀಯ ಮುಖಂಡರಾದ ಕಿರಣ್, ಕೆ.ಜಿ.ಮನು, ಪ್ರಶಾಂತ್, ಮಂಜುನಾಥ್, ಮನು ತನ್ನ ಸ್ನೇಹಿತರೊಂದಿಗೆ ಸೇರಿ ಜೆಸಿಬಿ ಬಳಸಿ ಹಸುವಿನ ಕಳೇಬರವನ್ನು ಹೂತು ಹಾಕಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.