ಸೋಮವಾರಪೇಟೆ, ಏ.2 : ಬೇರೋರ್ವರ ಆರ್‍ಟಿಸಿಯನ್ನು ನ್ಯಾಯಾಲಯಕ್ಕೆ ನೀಡಿ ಆರೋಪಿಯೋರ್ವನಿಗೆ ಜಾಮೀನು ಒದಗಿಸಿದ ನಕಲಿ ಜಾಮೀನುದಾರನ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಶನಿವಾರಸಂತೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿ ಪ್ರದೀಪ್ ಎಂಬಾತನಿಗೆ ಕಳೆದ 25.11.2014ರಲ್ಲಿ ವೇದಮೂರ್ತಿ ಎಂಬವರು ಶನಿವಾರಸಂತೆ ಸಮೀಪದ ದೊಡ್ಡಕೊಳತ್ತೂರು ಗ್ರಾಮದ ಜಯಲಿಂಗಪ್ಪ ಎಂಬವರಿಗೆ ಸೇರಿದ ಆರ್‍ಟಿಸಿಯನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ನೀಡಿ ತಾನೇ ಜಯಲಿಂಗಪ್ಪ ಎಂದು ತಿಳಿಸಿ ಆರೋಪಿಗೆ ಜಾಮೀನು ಕೊಡಿಸಿದ್ದರು.

ಇದೀಗ ನ್ಯಾಯಾಲಯಕ್ಕೆ ಸುಳ್ಳು ದಾಖಲೆ ನೀಡಿರುವದು ಬೆಳಕಿಗೆ ಬಂದಿದ್ದು, ಶಿರಸ್ತೇದಾರ್ ಲಕ್ಷ್ಮಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.