ವೀರಾಜಪೇಟೆ, ಏ.5: ಮೀನುಪೇಟೆಯ ಮಸ್ಜಿದುನ್ನೂರ್ ಸಮಿತಿಯ ಆಶ್ರಯದಲ್ಲಿ ತಾ6 ರಂದು (ಇಂದು) ರಾತ್ರಿ 7.30ಗಂಟೆಗೆ ಮಜ್ಲಿಸುನ್ನೂರ್ ಮತ್ತು 8:30ಗಂಟೆಗೆ ಧಾರ್ಮಿಕ ಪ್ರವಚನ ನಡೆಯಲಿದೆ. ವಯನಾಡಿನ ಪ್ರಸಿದ್ಧ ವಾಗ್ಮಿ ಅಬ್ದುಲ್ ಬಾರಿ ಬಾಖವಿ ಉಪನ್ಯಾಸ ನೀಡಲಿದ್ದಾರೆ. ಮಹಿಳೆಯರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆಯೆಂದು ಸಂಘಟಕರು ತಿಳಿಸಿರುತ್ತಾರೆ.