ಮಡಿಕೇರಿ, ಏ.5 : ಮಡಿಕೇರಿ ಸಮೀಪದ ಹಾಕತ್ತೂರು-ಬಿಳಿಗೇರಿ ದರ್ಗಾ ಶರೀಫ್‍ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಫಕೀರ್ ಭಾವ ಶಾ ವಲಿಯುಲ್ಲಾಹ್ ಅವರ ಉರೂಸ್ ತಾ. 8, 9 ಮತ್ತು 10 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಹಾಕತ್ತೂರು ಬದರ್ ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಪಿ.ಕೆ. ಖಾಲಿದ್ ಈ ಬಗ್ಗೆ ಮಾಹಿತಿ ನೀಡಿ, ಏ.8 ರಂದು ಹಾಕತ್ತೂರಿನ ಬದರ್ ಜಮಾಅತ್‍ನ ಅಧ್ಯಕ್ಷರಾದ ಪಿ.ಎಂ. ಅಬ್ದುಲ್ಲ ಅವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದ್ದು, ಮಗ್‍ರಿಭ್ ಸಮಾಜ್ ನಂತರ ಜುಮ್ಮಾ ಮಸೀದಿಯ ಖತೀಬರಾದ ಅಶ್ರಫ್ ಸಖಾಫಿ ಅವರ ನೇತೃತ್ವದಲ್ಲಿ ಮಖಾಂ ಅಲಂಕಾರ ಮತ್ತು ಝಿಯಾರತ್ ನಡೆಯಲಿದೆ. ಅಲ್ಲದೆ ಅಂದು ರಾತ್ರಿ 8 ಗಂಟೆಗೆ ಸಯ್ಯದ್ ಮುಹ್ಸಿನ್ ಸೈದಲವಿ ಕೋಯ ತಂಙಳ್ ಬಾಯರ್ (ಕುಂಜಿಲ ತಂಙಳ್) ಅವರ ನೇತೃತ್ವದಲ್ಲಿ ದಿಕ್ರ್‍ಹಲ್ಕ ಮತ್ತು ದುಹಾ ಮಜ್ಲಿಸ್ ನಡೆಯಲಿದೆಯೆಂದು ತಿಳಿಸಿದರು.

ತಾ. 9 ರಂದು ಮಧ್ಯಾಹ್ನ 3 ಗಂಟೆಗೆ ಮೌಲೂದ್ ಪಾರಾಯಣ ಮತ್ತು ಸಂಜೆ 5 ಗಂಟೆಗೆ ಅನ್ನದಾನ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ಸುಫ್‍ಯಾನ್ ಸಖಾಫಿ ಕಾಟಿಪಳ್ಳ ಅವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ತಾ. 10 ರಂದು ರಾತ್ರಿ 8 ಗಂಟೆಗೆ ಹಾಕತ್ತೂರು ಖತೀಬರಾದ ಅಶ್ರಫ್ ಸಖಾಫಿ ತರುವಣ ಅವರು ಮತ ಪ್ರವಚನ ಮಾಡಲಿದ್ದಾರೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಾಕತ್ತೂರು ಬದರ್ ಜಮಾಅತ್ ಅಧ್ಯಕ್ಷರಾದ ಪಿ.ಎಂ. ಖಾದರ್, ಸದಸ್ಯರಾದ ಕೆ.ಎಂ. ಖಾಸಿಂ ಉಪಸ್ಥಿತರಿದ್ದರು.