ಮಡಿಕೇರಿ, ಏ. 6: ತಾಳತ್ತಮನೆಯ ನೇತಾಜಿ ಯುವಕ ಮಂಡಲದ 2018-19ನೇ ಸಾಲಿನ ಅಧ್ಯಕ್ಷ ಬಿ.ಬಿ. ದಿವೇಶ್ ರೈ ಹಾಗೂ ಕಾರ್ಯದರ್ಶಿಯಾಗಿ ಬಿ.ಬಿ. ಹರೀಶ್ ರೈ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಕೆ.ಕೆ. ಗಣೇಶ್, ಸಹ ಕಾರ್ಯದರ್ಶಿಯಾಗಿ ಬಿ.ಜೆ. ನಿತ್ಯಾನಂದ ರೈ, ಖಜಾಂಚಿಯಾಗಿ ಬಿ.ಬಿ. ಸುದೀಪ್ ರೈ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಕೆ. ಸಲೀಂ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಯುವಕ ಮಂಡಲದ 26ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬಿ.ಬಿ. ದಿವೇಶ್ ರೈ ವಹಿಸಿದ್ದರು. ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಆಂತರಿಕ ಲೆಕ್ಕ ಪರಿಶೋಧಕ ಸಿ.ಕೆ. ಶ್ರೀಪತಿ ಹಾಗೂ ಸಲಹೆಗಾರ ಎ.ಎನ್. ರಘು ನಡೆಸಿಕೊಟ್ಟರು.