ಕುಶಾಲನಗರ, ಏ. 6: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬೈಲುಕೊಪ್ಪೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್‍ಗಳ ಪೆÀರೇಡ್ ನಡೆಯಿತು.

ಚುನಾವಣಾ ಸಂದರ್ಭದಲ್ಲಿ ಯಾವದೇ ಬೆದರಿಕೆ ಹಾಕುವದು, ಅಶಾಂತಿ ಅಥವಾ ಗಲಭೆಯಲ್ಲಿ ಪಾಲ್ಗೊಳ್ಳುವದು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಬೈಲುಕೊಪ್ಪ ಠಾಣಾಧಿಕಾರಿ ಪಿ.ಲೋಕೇಶ್ ಎಚ್ಚರಿಕೆ ನೀಡಿದರು.

ವೃತ್ತ ನಿರೀಕ್ಷಕ ಪ್ರದೀಪ್ ರೌಡಿ ಶೀಟರ್‍ಗಳಿಗೆ ಎಚ್ಚರಿಕೆ ನೀಡಿ, ತಮ್ಮ ನಡವಳಿಕೆಗಳನ್ನು ಸರಿಪಡಿಸಿ ಕೊಳ್ಳುವಂತೆ ಕಿವಿಮಾತು ಹೇಳಿದರು.

ಬೈಲುಕೊಪ್ಪೆ, ಕೊಪ್ಪ ಸುತ್ತಮುತ್ತಲ ವ್ಯಾಪ್ತಿಯ ರೌಡಿ ಶೀಟರ್‍ಗಳು ಈ ಸಂದರ್ಭ ಠಾಣೆಗೆ ಹಾಜರಾಗಿದ್ದರು.