ಸೋಮವಾರಪೇಟೆ, ಏ. 7 : ತಾಲೂಕು ರೈತ ಸಂಘದ ಸ್ಥಾಪಕಾಧ್ಯಕ್ಷ, ರೈತಪರ ಹೋರಾಟಗಾರ, ಇನಕನಹಳ್ಳಿ ನಿವಾಸಿ ಐ.ಪಿ.ಭವೇರಪ್ಪ (65) ತಾ. 7ರಂದು ಬೆಳಿಗ್ಗೆ ನಿಧನರಾದರು.ಕಳೆದ ಕೆಲ ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದ ಭವೇರಪ್ಪ 2008ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಮೃತರು ಪತ್ನಿ ಭಾಗ್ಯ ಸೇರಿದಂತೆ ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ಮೃತರ ಸ್ವಗ್ರಾಮದಲ್ಲಿ ನೆರವೇರಿತು.