ಸಿದ್ದಾಪುರ, ಏ. 28: ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ ಇತ್ತೀಚೆಗೆ ನಡೆದ 5 ದಿನಗಳ ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಕ್ರಿಕೆಟ್ ಪಂದ್ಯಾಟದ ಸಂದರ್ಭ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಾಲಕಿಯರ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ಬಾಲಕಿಯರ ಕುಟುಂಬಕ್ಕೆ ನೀಡಲಾಯಿತು. ಇಂಜಿಲಗೆರೆ ಅನಾರೋಗ್ಯ ಪೀಡಿತ ಬಾಲಕಿ ಅಖಿಲಾ ಹಾಗೂ ವೀರಾಜಪೇಟೆಯ ಬಾಲಕಿ ನಿವೇದಿತರವರ ಪೋಷಕರಿಗೆ ಕೆ.ಸಿ.ಎಲ್ ಪಂದ್ಯಾಟದ ಸಂದರ್ಭ ಸಂಗ್ರಹಿಸಲಾಗಿದ್ದ ರೂ. 50 ಸಾವಿರ ಹಣವನ್ನು ನೀಡಲಾಯಿತು. ಈ ಸಂದರ್ಭ ಸಮಿತಿಯ ಕಾರ್ಯದರ್ಶಿ ಎ.ಎಸ್ ಮುಸ್ತಫ, ಕೋಶಾಧಿಕಾರಿ ಎಂ.ಎ ಅಜೀಜ್, ಸಂಚಾಲಕರಾದ ಮುಬಾರಕ್ ಸದಸ್ಯರಾದ ರತೀಶ್, ಶ್ರೇಯಸ್, ಶೌಕತ್, ಶಫೀರ್,ಮುಸ್ತಫ ಇದ್ದರು.