ಮಡಿಕೇರಿ, ಏ.28 : ಮಡಿಕೇರಿ ನಗರ ಜಾತ್ಯತೀತ ಜನತಾದಳದ ಕಾರ್ಯದರ್ಶಿಗಳಾಗಿ ಎಂ.ಹೆಚ್.ಬಶೀರ್ ಅಹಮ್ಮದ್, ಜಿ.ಜಿ.ಕುಮಾರ್ ಹಾಗೂ ಯುವ ಘಟಕದ ಉಪಾಧ್ಯಕ್ಷರಾಗಿ ನಿತಿನ್ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಾತ್ಯತೀತ ಜನತಾದಳದ ನಗರಾಧ್ಯಕ್ಷ ಬಿ.ವೈ.ರಾಜೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.