ಮಡಿಕೇರಿ ಏ.28 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಗೌಳಿಬೀದಿಯ ಶ್ರೀಕಂಚಿಕಾಮಾಕ್ಷಿ ಯಮ್ಮ ದೇವಾಲಯದ ಕರಗೋತ್ಸವವು ತಾ.29 ರಿಂದ ಮೇ 2 ರವರೆಗೆ ನಡೆಯಲಿದೆ. ತಾ.29 ರಂದು (ಇಂದು) ಸಂಜೆ ಶ್ರೀಕಂಚಿಕಾಮಾಕ್ಷಿಯಮ್ಮ ಹಾಗೂ ಶ್ರೀಮುತ್ತು ಮಾರಿಯಮ್ಮ ದೇವರ ಬೇವಿನ ಕರಗಗಳು ನಗರದ ಪಂಪಿನ ಕೆರೆಯಲ್ಲಿ ಶೃಂಗರಿಸಲ್ಪಟ್ಟು ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯ ತಲಪಲಿವೆ. ಮೇ 1 ರಂದು ರಾತ್ರಿ ದೇವಾಯದಲ್ಲಿ ಕರಗಗಳಿಗೆ ವಿಶೇಷ ಪೂಜೆ ನಡೆಯಲಿದೆ. ಮೇ 2 ರಂದು ಸಂಜೆ ವಿವಿಧ ಧಾರ್ಮಿಕ ವಿಧಿ ವಿಧಾನಗಳ ನಂತರ ಕರಗಗಳನ್ನು ವಿಸರ್ಜಿಸಲಾಗುವದು ಎಂದು ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎ.ಲೋಕನಾಥ್ ತಿಳಿಸಿದ್ದಾರೆ.