ಪೊನ್ನಂಪೇಟೆ, ಏ. 30: ಬೇಗೂರಿನಲ್ಲಿ ದಾದು ಪೂವಯ್ಯ ಅವರ ಮನೆಯ ಮೇಲೆ ಇತ್ತೀಚೆಗೆ ನಡುರಾತ್ರಿ ಗುಂಡಿನ ಧಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆಗಿಳಿದಿದ್ದ ಪೊನ್ನಂಪೇಟೆ ಪೊಲೀಸರು ಧಾಳಿ ನಡೆದ ಮನೆಯ ಸಮೀಪದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ವಾಹನವೊಂದರ ಮಾಹಿತಿ ಆಧರಿಸಿ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.