ಮಡಿಕೇರಿ, ಮೇ. 1: ಕಾಳುಮೆಣಸಿನ ದರ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಳವಾಗಲಿದ್ದು, ರೈತರು ಯಾವದೇ ಕಾರಣಕ್ಕೂ ಹತಾಶರಾಗಬಾರದೆಂದು ಕಾಪೆÇ್ಗ ಪ್ರಕಟಣೆ ತಿಳಿಸಿದೆ. ಕಾಳು ಮೆಣಸು ದರ ಸದ್ಯ ಕೆ.ಜಿ.ಗೆ ರೂ.350 ರ ಆಸುಪಾಸಿನಲ್ಲಿದ್ದು ಯಥೇಚ್ಚವಾಗಿ ಕಾಳುಮೆಣಸು ಮಾರುಕಟ್ಟೆಗೆ ಬರುತ್ತಿರುವದು ದರ ಕುಸಿತಕ್ಕೆ ತಾತ್ಕಾಲಿಕ ಕಾರಣವಾಗಿದೆ. ಕನಾ9ಟಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಹಣ ಚಲಾವಣೆ ಬಿಗಿಯಾಗಿರುವದು ಕೂಡಾ ಕರಿಮೆಣಸು ದರ ಕುಸಿತಕ್ಕೆ ಒಂದು ಕಾರಣ ಎಂದು ಕಾಳುಮೆಣಸು ಬೆಳೆಗಾರರ ಸಮನ್ವಯ ಸಮಿತಿ ಕಾಪೆÇ್ಗ ಸಂಚಾಲಕ ಕೊಂಕೋಡಿ ಪದ್ಮನಾಭ ತಿಳಿಸಿದ್ದಾರೆ.

ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ದರ ಏರಿಕೆ ಆಗುತ್ತಿದ್ದು ವಿಯೆಟ್ನಾಂ ಕಾಳುಮೆಣಸನ್ನು ಆಮದು ಮಾಡಿಕೊಳ್ಳುವಲ್ಲಿ ಚೀನಾ ಬಹಳ ಉತ್ಸುಕವಾಗಿದೆ. ಕಾಪೆÇ್ಗ ನಿರಂತರ ಪ್ರಯತ್ನದಿಂದ ಕಾಳುಮೆಣಸು ಆಮದು ವಹಿವಾಟಿನಲ್ಲಿ ಸಾಕಷ್ಟು ಅವ್ಯವಹಾರ ಮಾಡಿದ್ದ ಆಮದುದಾರರ ಮೇಲೆ ಕೇಂದ್ರ ಜಾರಿ ನಿರ್ದೇಶನಾಲಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ. ಇದಕ್ಕಾಗಿ ಎಲ್ಲಾ ಕಾಳುಮೆಣಸು ಬೆಳೆಗಾರರ ಪರವಾಗಿ ಕಾಪೆÇ್ಗ ಸಂಸ್ಥೆಯು ಜಾರಿನಿರ್ದೇಶನಾಲಯದ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸಿದೆ. ಇದೀಗ ಕಳಪೆ ಗುಣಮಟ್ಟದ ಕಾಳುಮೆಣಸು ಆಮದು ಬಹುತೇಕ ಕಡಿಮೆಯಾಗಿದೆ. ಈ ಎಲ್ಲಾ ಕಾರಣಗಳಿಂದ ಕಾಳುಮೆಣಸಿನ ದರ ಮುಂದಿನ ಕೆಲವು ದಿನಗಳಲ್ಲಿ ಏರಿಕೆಯಾಗುವ ಸಂಭವವಿದ್ದು , ರೈತರು ಹತಾಶರಾಗದೆ ತಮ್ಮ ಉಪಯೋಗಕ್ಕೆ ಬೇಕಾದಷ್ಟೇ ಕಾಳುಮೆಣಸು ಮಾರಾಟ ಮಾಡಬೇಕಾಗಿ ವಿನಂತಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಳುಮೆಣಸಿನ ದರದಲ್ಲಿ ಏರಿಕೆ ಕಂಡುಬರಬಹುದೆಂದು ಕಾಪೆÇ್ಗ ಸಂಚಾಲಕ ಕೊಂಕೋಡಿ ಪದ್ಮನಾಭ ಹಾಗೂ ಸಂಯೋಜಕ ಕೆ.ಕೆ. ವಿಶ್ವನಾಥ ಜಂಟಿಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.