ಮಡಿಕೇರಿ, ಮೇ 5: ತಾ. 3 ರಂದು ಸುರಿದ ಭಾರೀ ಮಳೆ - ಗಾಳಿಯಿಂದಾಗಿ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದ್ದೂರು ಗ್ರಾಮದ ಮೇಕಂಡ ಕುಟುಂಬಸ್ಥರ ಕೈಮಡ (ಗುರುಕಾರಣ) ದೇವಸ್ಥಾನದ ಮೇಲೆ ಭಾರೀ ಗಾತ್ರದ ಆಲದ ಮರ ಉರುಳಿ ಬಿದ್ದ ಘಟನೆಯಿಂದ ಅಂದಾಜು ರೂ. 50,000 ನಷ್ಟ ಸಂಭವಿಸಿದೆ. ಸ್ಥಳಕ್ಕೆ ಹೊದೂರು ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಆರ್. ಸುಶೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.