ಮಡಿಕೇರಿ, ಮೇ 5: ನಗರದ ದೇಚೂರಿನಲ್ಲಿ ಬಿ. ಜಯಾ ಅಪ್ಪಚ್ಚು ಎಂಬವರ ಮನೆಯಲ್ಲಿ ಕಳವು ನಡೆದಿದೆ. ಜಯಾ ಅಪ್ಪಚ್ಚು ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ದೇಚೂರಿನಲ್ಲಿರುವ ಅವರ ಮನೆಯಲ್ಲಿ ಖಜಾನೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ನಾಗರಾಜು ಎಂಬವರು ಕಳೆದ 6 ವರ್ಷಗಳಿಂದ ಬಾಡಿಗೆಗಿದ್ದಾರೆ. ನಿನ್ನೆ ದಿನ ನಾಗರಾಜು ಅವರು ಊರಿಗೆ ತೆರಳಿದ್ದರು. ಈ ವೇಳೆ ಅವರ ಮನೆಯ ಮೂಲಕ ಜಯಾ ಅಪ್ಪಚ್ಚು ಅವರ ಮನೆಗೆ ನುಗ್ಗಿರುವ ಕಳ್ಳರು ಎರಡು ಬಂದೂಕು ಹಾಗೂ 2 ಮದ್ಯದ ಬಾಟಲಿಯನ್ನು ಕಳವು ಮಾಡಿದ್ದಾರೆ.ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ ಬಂದು ಪರಿಶೀಲನೆ ನಡೆಸಿತು.