ಕುಶಾಲನಗರ, ಮೇ 6: ಸಮೀಪದ ತೊರೆನೂರು ಗ್ರಾಮ ಬಳಿಯ ಅರಗಲ್ಲಿನ ನಿವೃತ್ತ ಉಪನ್ಯಾಸಕ ಟಿ.ಡಿ. ಶಿವಾನಂದ (79) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಮೃತರ ಅಂತ್ಯಸಂಸ್ಕಾರ ಶನಿವಾರ ಮೃತ ಸ್ವಗ್ರಾಮದಲ್ಲಿ ನಡೆಯಿತು. ಮೃತರು ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನಿಧನಕ್ಕೆ ಶಿಕ್ಷಕರ ಸಂಘ ಸಂತಾಪ ಸೂಚಿಸಿದೆ.