ಸೋಮವಾರಪೇಟೆ, ಮೇ 7: ಜಾತ್ಯಾತೀತ ಜನತಾ ದಳ ಪಕ್ಷದ ವತಿಯಿಂದ ಪಟ್ಟಣದ ವಿವಿಧೆಡೆ ವಿಧಾನಸಭಾ ಚುನಾವಣಾ ಅಭ್ಯರ್ಥಿ ಬಿ.ಎ. ಜೀವಿಜಯ ಪರವಾಗಿ ಮತಯಾಚನೆ ನಡೆಸಲಾಯಿತು. ಈ ಸಂದರ್ಭ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವ, ಕ್ಷೇತ್ರದ ವಕ್ತಾರ ಕಾಟ್ನಮನೆ ವಿಠಲ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಫೀಕ್, ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂಗಪ್ಪ, ಸದಸ್ಯ ಕೆ.ಪಿ. ರಾಯ್, ಕೆ.ಎ. ಅಬ್ಬಾಸ್ ಮತ್ತಿತರರು ಭಾಗವಹಿಸಿದ್ದರು.