ಕರಿಕೆ, ಮೇ 7: ಇಲ್ಲ್ಲಿಗೆ ಸಮೀಪದ ಗಡಿಭಾಗದ ಚೆಂಬೇರಿಯಲ್ಲಿ ಮದ್ಯದ ಅಂಗಡಿ ಸಮೀಪದಲ್ಲಿ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇರಳ ರಾಜ್ಯದ ಬಳಂತೋಡು ನಿವಾಸಿ ಮರದ ಕೆಲಸ ಮಾಡುವ ಜಯಪ್ರಕಾಶ್ ಎಂಬವರೆ ಮೃತ ವ್ಯಕ್ತಿಯಾಗಿದ್ದು, ಇಂದು ಬೆಳಿಗ್ಗೆ ಮದ್ಯದಂಗಡಿಯ ಕೂಗಳತೆ ದೂರದಲ್ಲಿ ಸಾರ್ವಜನಿಕರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ದೇಹದ ಮುಖದ ಮೇಲೆ ಗಾಯದ ಗುರುತು ಕಂಡುಬಂದಿದ್ದು, ಕುಟುಂಬಸ್ಥರ ಸಂಶಯಾಸ್ಪದ ಪ್ರಕರಣ ದಾಖಲಿಸಿದ್ದು, ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.