ಕೂಡಿಗೆ, ಮೇ 7: ಶನಿವಾರಸಂತೆಯ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಮೇಜರ್ ಆಟ್ರ್ಸ್ ಮತ್ತು ಯೋಗ ಶಾಲೆಯ 7ನೇ ರಾಜ್ಯಮಟ್ಟದ ಕರಾಟೆ ಹಾಗೂ ಯೋಗ ಪಂದ್ಯಾವಳಿಯಲ್ಲಿ ನಂಜರಾಯಪಟ್ಟಣದ ಜ್ಞಾನವಾಹಿನಿ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಸಾಧನೆ ಮಾಡಿದೆ. ವಿದ್ಯಾರ್ಥಿಗಳಾದ ತಶ್ವಿನ್, ಷಿಯಾಬುದ್ದೀನ್, ವಿಶ್ವನಾಥ ಹಾಗೂ ಹರ್ಷಿತ್ ಭಾಗವಹಿಸಿ ಪ್ರಥಮ (ಬಿಳಿ ಬೆಲ್ಟು ವಿಭಾಗದಲ್ಲಿ) ಹಂತದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳು ಸ್ವಾಮಿಯವರ ಮಾರ್ಗದರ್ಶನದಲ್ಲಿ ಕರಾಟೆ ಹಾಗೂ ಯೋಗ ಅಭ್ಯಾಸವನ್ನು ಮಾಡುತ್ತಿದ್ದಾರೆ. ಬಹುಮಾನ ವಿಜೇತ ವಿದ್ಯಾರ್ಥಿಗಳೊಂದಿಗೆ ಶಾಲೆ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ.ಕೆ. ಕುಶಾಲಪ್ಪ , ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್.ಬಿ. ನಂದಕುಮಾರ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಂ. ಸ್ವರೂಪ ಹಾಗೂ ಶಾಲೆಯ ಶಿಕ್ಷಕರು ಹಾಜರಿದ್ದರು.