ಶನಿವಾರಸಂತೆ, ಮೇ 8: ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ಕೊಪ್ಪದಲ್ಲಿನ ಎ.ಎಲ್.ಎನ್. ರಾವ್ ಸ್ಮಾರಕ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಡಾ. ತುಂಗಾ ಎಂ. ನಾಥ್ ಅವರು 2016-17ನೇ ಅಂತಿಮ ಬಿ.ಎ. ಎಂ.ಎಸ್. ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು, ಸಂಶೋಧನೆ - ಅಂಕಿ ಅಂಶಗಳ ವಿಷಯದಲ್ಲಿ ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದಲ್ಲಿ 8ನೇ ರ್ಯಾಂಕ್ ಪಡೆದು ಏಪ್ರಿಲ್ 29 ರಂದು ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ಶನಿವಾರಸಂತೆ ನಿವಾಸಿ ನೇತ್ರಾವತಿ ಬಿ.ಎಸ್. - ಮಂಜುನಾಥ್ ಅವರ ಪುತ್ರಿ.